ವಿದ್ಯಾರ್ಥಿನಿ ಸಿಂಚನ ಹಾಲಾಡಿಗೆ ಸಂಘದ ವತಿಯಿಂದ ಆರ್ಥಿಕ ನೆರವು

ತಂದೆ ತಾಯಿ ಇಲ್ಲದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 98 ಅಂಕ ಪಡೆದ ವಿದ್ಯಾರ್ಥಿನಿ ಸಿಂಚನ ಹಾಲಾಡಿ, ಅವಳಿಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ನಮ್ಮ ಸಮಾಜದ ಹೆಮ್ಮೆಯ ದಾನಿಗಳ ನೆರವಿನಿಂದ ನಾವು ಸುಮಾರು ಎಂಟು ವರ್ಷಗಳಿಂದ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದೇವೆ ನಮ್ಮೆಲ್ಲ ದಾನಿಗಳಿಗೆ ಸಂಘದ ಪರವಾಗಿ ಧನ್ಯವಾದಗಳು.

ಮಗುವಿನ ಶಸ್ತ್ರ ಚಿಕಿತ್ಸೆಗೆ ಸಂಘದ ವತಿಯಿಂದ ದೇಣಿಗೆ

ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸಂಘದ ಮಹಾ ಪೋಷಕರಾದ ಕೈಲಾಡಿ ಚಂದ್ರಶೇಖರ ಶೆಟ್ಟಿಯವರ ಮನವಿ ಮೇರೆಗೆ ಬೈಂದೂರ್ ತಾಲೂಕಿನ ಗೊಳಿಹೊಳೆ ನಿವಾಸಿ ಮಂಜುನಾಥ ನಾಯ್ಕ್ ಆವರ ಐದು ವರ್ಷದ ಮಗುವಿನ ಶಸ್ತ್ರ ಚಿಕಿತ್ಸೆಗೆ ನಮ್ಮ ಸಂಘದ ವತಿಯಿಂದ 10000 ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಲ. ಉದಯ ಶೆಟ್ಟಿ ಮಚ್ಚಟ್ಟು ನೀಡಿದರು.

ವಾಹಿನಿಯೊಂದರಲ್ಲಿ ನಟ ರಕ್ಷಿತ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮ: ಸಂಘದ ವತಿಯಿಂದ ಪೊಲೀಸ್ ಅಧಿಕಾರಿಗೆ ಮನವಿ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಂದು ಕುಂದಾಪುರದಲ್ಲಿ ನಟ “ರಕ್ಷಿತ್ ಶೆಟ್ಟಿ” ಅವರ ಬಗ್ಗೆ ವಾಹಿನಿಯೊಂದರಲ್ಲಿ ವರದಿಯಾದ “ಸಿನಿ ಅಡ್ಡ” ಎನ್ನುವ ಬೇಜವಾಬ್ದಾರಿತನದ ಕಾರ್ಯ ಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿದ್ದಲ್ಲದೆ ನಿಂದಿಸಿದ್ದಾರೆ. ಇದರಿಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಲ್ಲಿ ಬಹಳ ಬೇಸರ ಉಂಟಾಗಿದೆ. ಆದ್ದರಿಂದ ಇಂದು ಕುಂದಾಪುರದಲ್ಲಿ ಯುವ ಬಂಟರ ಸಂಘದ ವತಿಯಿಂದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಇವರ ನೇತತ್ವದಲ್ಲಿ ಕುಂದಾಪುರ…

ಶ್ರೀ ಕಂದಾವರ ಸತೀಶ್ ಶೆಟ್ಟಿ ಅವರಿಂದ ಒಂದು ಲಕ್ಷ ರೂಪಾಯಿ ಠೇವಣಿ

ದಿ.ಎಂ.ಗೋಪಾಲಕೃಷ್ಣ ಶೆಟ್ಟಿ ಕಂದಾವರ ಕೆಳಾಮನೆ ಸಂಸ್ಕರಣಾ ಪ್ರಗತಿಪರ ಕೃಷಿ ಪ್ರಶಸ್ತಿ: ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಅವರ ಮಗ ಶ್ರೀ ಕಂದಾವರ ಸತೀಶ್ ಶೆಟ್ಟಿ B.E.(Mech), MS(Energy) ಮಣಿಪಾಲ ಇವರು ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟಿರುತ್ತಾರೆ.    

ಬೆನ್ನು ಮೂಳೆ ಮುರಿತ – ಸಹಾಯಧನ ವಿತರಣೆ

ಶಾನ್ಕಟ್ಟು ಹೊಸಮನೆ ರತ್ನಾಕರ ಯಾನೆ ಬಾಬು ಶೆಟ್ಟಿಯವರಿಗೆ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ಕಳೆದ 22 ದಿನದಿಂದ ಮಣಿಪಾಲ ಆಸ್ಪತ್ರೆಯ icu ನಲ್ಲಿ ಇದ್ದು ಇದ್ದ ಹಣವೆಲಾ ಖರ್ಚು ಮಾಡಿ ಈಗ ತುಂಬ ಚಿಂತಾಜನಕ ಪರಿಸ್ಥಿತಿಯಲ್ಲಿ ಇದ್ದಾರೆ . ಇವರು ತಮಗೆ ಸಹಾಯ ಮಾಡಿ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ಕೊಟ್ಟ ಮನವಿಯನ್ನೂ ಪರಿಗಣಿಸಿ ಅವರಿಗೆ ಕಿರು ಕಾಣಿಕೆ ರೂಪದಲ್ಲಿ 10000 ರೂಪಾಯಿ ಹಣವನ್ನು ಸಂಘದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಪ್ರಧಾನ ಕಾರ್ಯದರ್ಶಿ ಉದಯ…