ಸಂಘದ ವತಿಯಿಂದ ಕ್ಯಾನ್ಸರ್ ರೋಗಿಗೆ ಸಹಾಯ

ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಕೊಂಗೆರಿ ನಿವಾಸಿ ಶ್ರೀಮತಿ ಉಷಾ ಶೆಟ್ಟಿ 32 ವರ್ಷ ಕಳೆದ ಹಲವು ದಿನಗಳಿಂದ ಕ್ಯಾನ್ಸರ್ ಎನ್ನುವ ಮಹಾಮಾರಿಗೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದು ಪ್ರಸ್ತುತ ಮಣಿಪಾಲ್ ಆಸ್ಪತ್ರೆ ಗೋವಾ ದಲ್ಲಿ ಚಿಕಿಸ್ಸೆ ಪಡೆದು ಕೊಳ್ಳುತ್ತಿದ್ದಾರೆ.

ಇವರ ಪತಿ ಗೋವಾದ ಹೊಟೇಲ್ ನಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಅಕಸ್ಮಾತ್ ಆಗಿ ಬರಸಿಡಿಲಿನಂತೆ ಬಂದು ಎರಗಿದ ಈ ಕುಟುಂಬಕ್ಕೆ ದಿಕ್ಕು ತೋಚದಂತಾಯಿತು. ಆ ಸಂದರ್ಬದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ಮನವಿ ನೀಡಿ ಸಹಾಯ ನೀಡುವಂತೆ ಕೋರಿ ಕೊಂಡಿದ್ದಾರೆ.

ಆವರ ಮನವಿಗೆ ಸ್ಪಂದಿಸಿ ನಮ್ಮ ಸಂಘದ ವತಿಯಿಂದ ಕಿರು ಸಹಾಯವಾಗಿ 10,000 ರೂಪಾಯಿಯನ್ನು ಸಂಘದ ಅಧ್ಯಕ್ಷರಾಧ ಸುನಿಲ್ ಶೆಟ್ಟಿ ಹೇರಿಕುದ್ರು ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮಚ್ಟಟ್ಟು ಆವರ ಉಪಸ್ಥಿತಿಯಲ್ಲಿ ನೀಡಲಾಯಿತು.

Leave Comment

Your email address will not be published. Required fields are marked *

This site uses Akismet to reduce spam. Learn how your comment data is processed.